ಬಳ್ಳಿ ಮರ

ಎಷ್ಟೊಂದು ಆಸೆಯಿಂದ
ನೆಟ್ಟಿದ್ದೆ ಹೂ ಬಳ್ಳಿಯನ್ನು
ಮರಕ್ಕೆ ಬಳ್ಳಿಯ ಸೆರೆ
ಬಳ್ಳಿಗೆ ಮರವಾಸರೆ
ಮರ ಬಳ್ಳಿ, ಬಳ್ಳಿ ಮರ
ಬಂಧ ಅನುಬಂಧ
ಗಟ್ಟಿಯಾಗಿ ಶಾಶ್ವತವಾಗಿ
ನೂರ್ಕಾಲ ನಗಲೆಂದು
ಹೂವಾಗಿ ಕಾಯಾಗಿ ಹಣ್ಣಾಗಿ
ಅಸಂಖ್ಯಾತ ಬಳ್ಳಿಯಾಗಲೆಂದು,
ಆಸೆಗಳೆಲ್ಲಾ ಮರೀಚಿಕೆ
ಮರ ಬಳ್ಳಿ, ಬಳ್ಳಿ ಮರ
ಕೊಡಲಿಲ್ಲ – ಕಳೆಯಲಿಲ್ಲ
ಒಲಿಯಲಿಲ್ಲ ಒಂದಾಗಲಿಲ್ಲ
ಉತ್ತರ ಧ್ರುವ – ದಕ್ಷಿಣ ಧ್ರುವ
ಮರಕ್ಕೆ ತನ್ನದೇ ದರ್ಪ ದೌಲತ್ತು
ಬಳ್ಳಿಗೆ ಸದಾ ಅನುವು ಆಪತ್ತು
ಮರ ಬಾಗಲಿಲ್ಲ.
ಬಳ್ಳಿ ಮೇಲೇರಲಿಲ್ಲ
ಎರಡೂ ಸಮಾನಾಂತರ ರೇಖೆಗಳು
ಯಥೇಚ್ಛವಾಗಿದೆ ಗಾಳಿ, ನೀರು
ಗೊಬ್ಬರ ಬೆಳಕು
ಮರಕ್ಕೆ ಎಷ್ಟಿದ್ದರೂ ಸಾಲದು
ಬಳ್ಳಿಗೆ ಇದ್ದರೂ ಬೇಕಾಗದು
ಬಳ್ಳಿಗೆ ಮರದ ನೆರಳು
ನೆರಳಾಯಿತು ಕೊರಳಿಗೆ ಉರುಳು
ಮರ ಬಾಗಬೇಕು
ಬಳ್ಳಿ ಮೇಲೇರಬೇಕು
ಒಂದನ್ನೊಂದು ತಬ್ಬಿ ನಲಿಯಬೇಕು
ಬೆಳೆಯಬೇಕು ಮುಗಿಲೆತ್ತರ
ನನಸಾದೀತೇ ಕನಸಿನ ಗೋಪುರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಸಂಧಿಸುವುದು ಇಲ್ಲ
Next post ಮುರಿದವರ್‍ಯಾರು?

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys